ರಾತ್ರಿ ಬೈಕ್ ಟ್ರಾಯಲ್ ಗೆ ಹೋದ ಸ್ನೇಹಿತರು| ಮರಳುವಾಗ ದುರ್ಘಟನೆ

ಗುರುಮಠಕಲ್ : ಇನ್ನು  ಬದುಕಿ ಬಾಳಬೇಕಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ಜರುಗಿದ್ದು, ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಎಸ್ ಎಸ್ ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿಗಳು ರಾತ್ರಿ ಕ್ಲಾಸ್ ಮುಗಿಸಿದ 4 ಸ್ನೇಹಿತರು ಒಟ್ಟಿಗೆ ಊಟ ಮಾಡಿದ್ದಾರೆ. ಇವರಲ್ಲಿ ಮಿನಾಸಪುರದ ವೆಂಕಟೇಶ (16) ಬೈಕ್ ತೆಗೆದುಕೊಂಡು ಬೂದುರ ಗೇಟ್ ತನಕ ಟ್ರಾಯಲ್ ಹೋಗಿ ಬರೋಣ ಎಂದು ಜೊತೆಗೆ ಇನ್ನೊಬ್ಬ ಸ್ನೇಹಿತ ಭಾನುಪ್ರಕಾಶ್ ನನ್ನು ಕರೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.

ಅಲ್ಲಿಂದ ಮರಳಿ ಗುರುಮಠಕಲ್ ಕಡೆಗೆ ಬರುವಾಗ ಸಿಂದಗಿ-ಹೈದ್ರಾಬಾದ ರಾಜ್ಯ ಹೆದ್ದಾರಿ ಸಂಖ್ಯೆ-16 ಮೇಲೆ ಬೂದುರ ಗೇಟ-ಬಸ್ ಡಿಪೊ ನಡುವೆ ದರ್ಗಾಕ್ಕೆ ಹೋಗುವ ರೋಡ ಹತ್ತಿರ ಕರ್ವಿಂಗನಲ್ಲಿ ದುರ್ಘಟನೆ ಸಂಭವಿಸಿದೆ.

ವೆಂಕಟೇಶ ಮೋಟರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಿಸಲು ಸಾಧ್ಯವಾಗದೆ ರಸ್ತೆಯ ಎಡಗಡೆ ನಾಟಿರುವ ಸಿಮೇಂಟಿನ ಕಂಬಕ್ಕೆ ಡಿಕ್ಕಿಪಡಿಸಿದ್ದರಿಂದ ಮೊಟರ ಸೈಕಲ್ ಹಾಕಿಕೊಂಡು ಕೆಳಗಡೆ ಬಿದ್ದಿದ್ದರಿಂದ ಗದ್ದಕ್ಕೆ ಸಾದಸ್ವರೂಪದ ಗಾಯ, ಬಲಗಡೆ ಎದೆಗೆ ತರುಚಿದ ಗಾಯವಾಗಿತ್ತು, ಬಲಕೈಗೆ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾನುಪ್ರಕಾಶನಿಗೆ ಸಾದಸ್ವರೂಪದ ಗಾಯಗಳಾಗಿವೆ. ಈ ಕುರಿತು ಗುರುಮಠಕಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!