ಗುರುಮಠಕಲ್: ಇಲ್ಲಿನ ಜೆಡಿಎಸ್ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ ಅವರ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಕೆಲ ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಭಾನುವಾರ ಮಧ್ಯಾಹ್ನ ಅವರನ್ನು ಭೇಟಿಯಾದರು.
ಈ ವೇಳೆ ಜಿಲ್ಲಾಧ್ಯಕ್ಷ ಸುಭಾಷ ಕಟಕಟಿ, ಶರಣು ಆವಂಟಿ, ಪ್ರಕಾಶ ನೀರೆಟಿ, ರವಿ ಗೋವಿನೋಳ, ಬಸ್ಸಣ್ಣ ದೇವರಹಳ್ಳಿ, ಅಂಬಾದಾಸ ಜೀತ್ರಿ, ಬಾಲಪ್ಪ ದಾಸರಿ, ನವಾಜರೆಡ್ಡಿ, ಅಶೋಕ ಕಲಾಲ್, ರಾಮಣ್ಣ ಕೋಟಗೇರಾ ಸೇರಿದಂತೆ ಜೆಡಿಎಸ್ ಮುಖಂಡು ಮತ್ತು ಕಾರ್ಯಕರ್ತರು ಇದ್ದರು.
