ಸ್ಥಳ ಬಿಟ್ಟು ಕದಲದ ಪುಟ್ಟ ಮಕ್ಕಳಿರವ ಆಶಾ ತಾಯಂದಿರು | ಯಾದಗಿರಿಯಲ್ಲಿ 2ನೇ ದಿನ ಧರಣಿ | ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮನವಿ ಸ್ವೀಕಾರ


ಯಾದಗಿರಿ: ಆಶಾ ಕಾರ್ಯಕರ್ತೆಯರ ಹೋರಾಟದ 2 ನೇ ದಿನ ಮಳೆಯ ಮಧ್ಯೆಯೂ ಪುಟ್ಟ ಮಕ್ಕಳಿರವ ಆಶಾ ತಾಯಂದಿರು ಯಾವುದನ್ನು ಲೆಕ್ಕಿಸದ ತಮ್ಮ ಬೇಡಿಕೆ ಈಡೇರಿಕೆಗಾಗಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಹಲವು ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರ ಸಂಘ ಹಲವು ಬಾರಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದರೂ, ತಮಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ ಎಂದು ಗೋಳು ತೋಡಿ ಕೊಂಡಿದ್ದಾರೆ. ಹೋರಾಟಗಾರರು ರಾತ್ರಿ ಚಳಿಯಲ್ಲಿ ಅನಾಥರಂತೆ ಕೊರಗುತ್ತಿದ್ದು, ಈಗ ಮಳೆಯಲ್ಲೇ ಹೋರಾಟ ಮುಂದುವರೆಸಿದ್ದಾರೆ.ಅಮ್ಮ ನಿನ್ನೊಂದಿಗೆ ನಾನಿರುವೆ : ಯಾದಗಿರಿ ಜಿಲ್ಲಾಡಳಿತ ಭವನದ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ ನಡೆಯುತ್ತಿದೆ. ಕೆಲವು ಪುಟ್ಟ ಮಕ್ಕಳಿರವ ಆಶಾ ತಾಯಂದಿರು ಪಾಲ್ಗೊಂಡಿದ್ದು, ಕೆಲವರು ಕೊಡೆ ಆಸರೆಯಲ್ಲಿದ್ದರೆ ಇನ್ನೂ ಕೆಲವರು ಮಕ್ಕಳನ್ನು ಎತ್ತಿಕೊಂಡೇ ಮಳೆಯಲ್ಲಿಯೇ ನೆನೆಯುತ್ತಾ ಇರುವ ಮನಕಲಕುವ ದೃಶ್ಯ ಕಂಡು ಬಂತು. ಇದು ಎಂತಹವರ ಕರುಳು ಚುರ್ ಎನ್ನುವಂತಿದೆ.

ಮನವಿ ಸ್ವೀಕರಿಸಿದ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ: ಆಶಾ ಕಾರ್ಯಕರ್ತೆಯರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಧರಣಿ ನಿರತರ ಮನವಿ ಆಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು, ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ ಎಂದು ಸಂಘದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೋರಾಟ ಮುಂದುವರೆದಿದೆ.

Spread the love

Leave a Reply

Your email address will not be published. Required fields are marked *

error: Content is protected !!