ಬಾಡಿಯಾಳ ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆ
ಸೈದಾಪುರ : ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳಡಿ ಸಮಾಜವನ್ನು ಸಂಘಟಿಸಲು ಸೈದಾಪುರ ವಲಯ ಕೋಲಿ ಸಮಾಜದ ಅಧ್ಯಕ್ಷ ರಮೇಶ ಭೀಮನಹಳ್ಳಿ ಹೇಳಿದರು.
ಸಮೀಪದ ಬಾಡಿಯಾಳ ಗ್ರಾಮದಲ್ಲಿ ಕೋಲಿ ಕಬ್ಬಲಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಬಳಿಕ ಮಾತನಾಡಿದರು.
ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕಾವಲಿ, ಉಪಾಧ್ಯಕ್ಷ ಭೀಮು ಗುಡೇಬಲ್ಲೂರ್ ಸೇರಿದಂತೆ ಪದಾಧಿಕಾರಿಗಳ ನೇಮಕ ನಡೆಯಿತು. ಈ ಸಂದರ್ಭದಲ್ಲಿ ಸೈದಾಪೂರ ವಲಯ ಕೋಲಿ ಕಬ್ಬಲಿಗ ಸಮಾಜ ಸಂಘದ ಗೌರವಾಧ್ಯಕ್ಷ ವೆಂಕಟೇಶ್ ಗಡದ್, ಗುರುರಾಜ್ ಘಂಟಿ , ಪ್ರಭು ಗೂಗಲ್, ತಾಯಪ್ಪ ಚಿಗರಿ, ಯುವ ಘಟಕ ಅಧ್ಯಕ್ಷರಾದ ಆಂಜನೇಯ ಕಟ್ಟಿಮನಿ ರಾಂಪುರ್, ಶಿವರಾಜ್ ದುಪ್ಪಲ್ಲಿ , ನಗರ ಘಟಕ ಅಧ್ಯಕ್ಷರಾದ ಅಂಬರೀಶ್ ರಾಚನಹಳ್ಳಿಕರ್, ಆನಂದ್ ಬಾಗ್ಲಿ ಸೈದಾಪುರ್, ಬಾಡಿಯಲ್ ಗ್ರಾಮದ ಮುಖಂಡರಾದ ಅಯ್ಯಪ್ಪ ಇರಿಜನ್, ದೇವಪುತ್ರ ತಿಮ್ಮೋಜಿ, ಹನುಮಂತರಾಯ ತಿಮ್ಮಾಜಿ, ರಾಮಣ್ಣ ಗೂಡುರ, ಮಂಜುನಾಥ್ ಕಾವಲಿ, ಬಸಲಿಂಗ ಕಾವಲಿ, ಮಂಜುನಾಥ್ ಬೇಡಿಕೆ, ದೇವು ಗುರ್ಜಲ, ಮಹಾಂತೇಶ್ ಗೌಲ್, ಕಾಶಿನಾಥ್ ರಾಮಣ್ಣೋರ, ಯಲ್ಲಪ್ಪ ಕಾವಲಿ, ಚೌಡಪ್ಪ ಜನಕೇರಿ ಇನ್ನು ಮುಂತಾದ ನಮ್ಮ ಕೂಲಿ ಕಬ್ಬಲಿಗೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
