ಜಿಲ್ಲಾ ಮಹಿಳಾ ಮೋರ್ಚಾ ಪ್ರಮುಖರಿಂದ ಪೊಲೀಸರಿಗೆ ರಾಖಿ ಕಟ್ಟಿ ಸಂಭ್ರಮ | ಜಾತಿ ಭೇದ ಮರೆತು ಸಹೋದರತೆ ಸಾರು ಬಂಧನ
ಯಾದಗಿರಿ: ನಗರ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಊರಿನ ಕೆಲ ಯುವಕರಿಗೆ ರಾಖಿಯನ್ನು ಕಟ್ಟುವ ಮುಖಾಂತರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಠಾಣಾಧಿಕಾರಿ ಮಂಜನಗೌಡ ರಕ್ಷಾ ಬಂಧನ ಸ್ವೀಕರಿಸಿ ಮಾತನಾಡಿ, ಹಬ್ಬವು ಜಾತಿ, ಬೇಧ ಹೋಗಲಾಡಿಸಿ ಸಹೋದರತೆಯ ಭಾವವನ್ನು ಬಿಂಬಿಸುವುದಾಗಿದೆ. ನಮ್ಮ ದೇಶದಲ್ಲಿ ಸಂಬಂಧಗಳಿಗಿರುವ ಮಹತ್ವ ಜಗತ್ತಿನ ಯಾವ ದೇಶದಲ್ಲಿಯೂ ಕಂಡು ಬರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್ ಮಾತನಾಡಿ, ಅಣ್ಣ ತಂಗಿಯರ ಹಬ್ಬ, ಅಕ್ಕ ತಮ್ಮಂದಿರ ಹಬ್ಬ. ಅಕ್ಕ ತಂಗಿಯರ ರಕ್ಷಣೆಗಾಗಿ ನಡುಕಟ್ಟಿ ನಿಲ್ಲುವ ಅಣ್ಣ ತಮ್ಮಂದಿರನ್ನು ಪ್ರೀತಿಯಿಂದ ಹರಸಿ ಹಾರೈಸುವ ಹಬ್ಬ ಎಂದರು.
ದೇಶದಾದ್ಯಂತ ಈ ಹಬ್ಬವನ್ನು ಎಲ್ಲ ಅಕ್ಕತಂಗಿಯರು ತಮ್ಮ ಅಣ್ಣ ತಮ್ಮಂದಿರಿಗಾಗಿ ಆಚರಿಸುತ್ತಾರೆ. ಅಣ್ಣ ತಮ್ಮಂದಿರ ಕ್ಷೇಮ ಅವರ ಆರೋಗ್ಯ ಆಯಸ್ಸು ಚೆನ್ನಾಗಿರಲೆಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು..
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ, ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ, ಕಾರ್ಯದರ್ಶಿ ಶಕುಂತಲಾ ಗುಜನೂರು, ಉಪಾಧ್ಯಕ್ಷೆ ಮಂಜುಳಾ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
