ಗುರುಮಠಕಲ್: ತಾಲೂಕಿನ ನೂತನ ಕಾರ್ಯನಿರತ ಪತ್ರಕರ್ತ ಸಂಘ ರಚನೆಯಾದ ಹಿನ್ನೆಲೆಯಲ್ಲಿ, ಅಧ್ಯಕ್ಷ ದಯಾನಂದ ಹಿರೇಮಠ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಯಾದಗಿರಿ ನಿವಾಸದಲ್ಲಿ ಸ್ಥಳೀಯ ಶಾಸಕ ಶರಣಗೌಡ ಕಂದಕೂರು ಅವರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ ಕಲಾಲ, ತಾಲೂಕು ಉಪಾಧ್ಯಕ್ಷ ರವೀಂದ್ರ ಗೌಡ, ಪ್ರಧಾನ ಕಾರ್ಯದರ್ಶಿ ಅನಿಲ್ ಬಸುದೆ, ಖಜಾಂಚಿ ವಿಜಯ ಹಿರೇಮಠ, ಮಾಜಿ ಅಧ್ಯಕ್ಷ ಚೆನ್ನಕೇಶವ ಗೌಡ, ಬಾಬಾ ಚಿಂತಕುಂಟಿ, ನಾಗರಾಜ ಪತಂಗೆ, ರಾಜಲಿಂಗಪ್ಪ ಸಜ್ಜನ್, ಫಹಾದ್ ಹಾಗೂ ಶಿವಕುಮಾರ ಗದ್ವಾಲ್ ಉಪಸ್ಥಿತರಿದ್ದರು.
