ಯದ್ಲಾಪೂರ ವ್ಯಕ್ತಿ ವಿದ್ಯುತ್ ಅವಘಡದಲ್ಲಿ ಸಾವು | ಶಾಸಕ ಶರಣಗೌಡ ಕಂದಕೂರರಿಂದ ಪರಿಹಾರ ಚೆಕ್ ವಿತರಣೆ
ಯಾದಗಿರಿ : ಕೆಲ ದಿನಗಳ ಹಿಂದೆ ಗುರುಮಠಕಲ್ ತಾಲೂಕಿನ ಯದ್ಲಾಪುರ್ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಅನಿಲ್ ಸಾಬಣ್ಣ ಇವರಿಗೆ ಜೆಸ್ಕಾಂ ಇಲಾಖೆಯ ವತಿಯಿಂದ ಮಂಜೂರಾದ ₹5 ಲಕ್ಷ ಪರಿಹಾರ ಧನವನ್ನು ಗುರುಮಠಕಲ್ ಮತಕ್ಷೇತ್ರದ ಯುವ ಶಾಸಕರಾದ ಶರಣಗೌಡ ಕಂದಕೂರ ಅವರು ಮೃತನ ತಂದೆಗೆ ವಿತರಿಸಿ, ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಜನತಾದಳ ಪಕ್ಷದ ಜಿಲ್ಲಾಧ್ಯಕ್ಷರಾದ ಸುಭಾಷ್ ಚಂದ್ರ ಕಟಕಟಿ, ಯದ್ಲಾಪುರ್ ಗ್ರಾಮದ ಮುಖಂಡರಾದ ಅನಂತಪ್ಪ ಬೋಯಿನ್, ಮಹೇಶ್, ಲಿಂಗಾರೆಡ್ಡಿ ಮತ್ತು ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರದ ಮಾನಪ್ಪ ಮತ್ತು ಶಾಖಾಧಿಕಾರಿಯಾದ ಗೋಳಪ್ಪ ಮತ್ತು ಸಂದೀಪ್ ಹಜಾರೆ ಇದ್ದರು.
