ಬಳಿಚಕ್ರದಲ್ಲಿ ಮಾದರಿ ನಾಡ ಕಚೇರಿ ಉದ್ಘಾಟನೆ | ಜನರ ಕಷ್ಟಗಳಿಗೆ ಪರಿಹಾರ ಸಿಕ್ಕಾಗ ಸಾರ್ಥಕ | ಶಾಸಕ ಶರಣಗೌಡ ಕಂದಕೂರ ಅಭಿಮತ

3 ಮಾರ್ಗಗಳಿಗೆ 70 ಲಕ್ಷ ಅನುದಾನ ಬಿಡುಗಡೆ ಬೇಸಿಗೆಯಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನ

ಗುರುಮಠಕಲ್: ಹಿಂದೆ ಭಾಷಣ ಮಾಡಿ ಹೋಗಿದ್ದಾರೆ, ಈಗ ನಾನು ರೊಕ್ಕ ತಗೊಂಡೇ ಬಂದಿದ್ದೀನಿ ಎಂದು ಶಾಸಕ ಶರಣಗೌಡ ಕಂದಕೂರ ಎದುರಾಳಿಗಳಿಗೆ ಪರೋಕ್ಷವಾಗಿ ಹೆಸರು ಪ್ರಸ್ತಾಪ ಮಾಡದೇ ಟಾಂಗ್ ನೀಡಿದ ಪ್ರಸಂಗ ಬಳಿಚಕ್ರದಲ್ಲಿ ನಡೆದಿದೆ.

2020-21 ನೇ ಸಾಲಿನ ಗುರುಮಠಕಲ್ ಮತಕ್ಷೇತ್ರದ ಬಳಿಚಕ ಗ್ರಾಮದಲ್ಲಿ 60 ಲಕ್ಷ ವೆಚ್ಚದ ಮಾದರಿ ನಾಡ ಕಛೇರಿ ಕಟ್ಟಡ ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಸ್ವಲ್ಪ ದೂರದಲ್ಲಿ ಎದುರಿಗೆ ನಿಂತಿದ್ದ ವ್ಯಕ್ತಿಯೊಬ್ಬ ಯಾವ ಮಾರ್ಗದ ಕಾಮಗಾರಿಯು ನಡೆದಿಲ್ಲ ಎಂದು ಹೇಳಿದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಿಂದೆ ಭಾಷಣ ಮಾಡಿ ಹೋಗಿದ್ದಾರೆ. ಈಗ ನಾನು ಅಭಿವೃದ್ಧಿಗೆ ಅನುದಾನ ತಂದಿರುವೆ ಎಂದು ಮುಗುಳ್ನಗೆ ಮೂಲಕ ಒಂದು ವಾಕ್ಯದಲ್ಲಿ ಸಮಜಾಯಿಷಿ ನೀಡಿದರು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಚೇರಿಗಳಿಗಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಆದರೇ ಜನರಿಗೆ ಸಮರ್ಪಕ ಸ್ಪಂದನೆ ಸಿಗಬೇಕು. ಕಷ್ಟಗಳಿಗೆ ಪರಿಹಾರ ಸಿಕ್ಕಾಗ ಇದು ಸಾರ್ಥಕವಾಗುತ್ತದೆ ಎಂದು ನುಡಿದರು.

ತಮ್ಮ ತಂದೆ ಮಾಜಿ ಶಾಸಕ ನಾಗನಗೌಡ ಕಂದಕೂರ ಅವರ ಅವಧಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದ್ದ ಕಟ್ಟಡ ತಮ್ಮಿಂದ ಉದ್ಘಾಟನೆ ಭಾಗ್ಯ ಸಿಕ್ಕಿದೆ ಎಂದರು.

ಕಚೇರಿಗಳಲ್ಲಿ ಸಿಬ್ಬಂದಿಗಳು ಸಾರ್ವಜನಿಕರನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು. ಅವರ ಕಷಗಳನ್ನು ಆಲಿಸಿ ಪರಿಹರಿಸಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್ ಅವರು ಅಭಿವೃದ್ಧಿ ವಿಷಯದಲ್ಲಿ ತುಂಬಾ ಸಹಕಾರ ನೀಡಿದ್ದಾರೆ ಎಂದು ಹೊಗಳಲಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಶರಣಬಸ್ಸಪ್ಪ ಕೋಟೆಪ್ಪಗೋಳ, ತಹಸೀಲ್ದಾರ್ ಸುರೇಶ ಅಂಕಲಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ ಕಟಕಟೆ, ಮಲ್ಲನಗೌಡ ಕೌಳೂರು, ಮಲ್ಲಿಕಾರ್ಜುನ ಅರುಣಿ, ಮಲ್ಲನಗೌಡ ಕೌಳೂರ,  ಬಳಿಚಕ್ರ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!