ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸುವುದು ಹಿಂದೂ ಸಂಪ್ರದಾಯವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ದಾಮೋಧರನ ಜನುಮ ದಿನ ಶ್ರದ್ಧಾ,ಭಕ್ತಿಯಿಂದ  ಆಚರಿಸಲಾಗುತ್ತಿದೆ.

ಈ ಹಬ್ಬವು ನಂಬಿಕೆ, ಸಂತೋಷ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತವಾಗಿದೆ. ಭಗವಾನ್ ಶ್ರೀಕೃಷ್ಣನ ಜನ್ಮದಿನ ದೇಶದಾದ್ಯಂತ ಭಕ್ತಿ, ಭಜನೆ, ಕೀರ್ತನೆ ಮತ್ತು ಮೊಸರಿನ ಮಡಿಕೆ ಹೊಡೆತ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಾಗುತ್ತದೆ.


ಗುರುಮಠಕಲ್: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಸ್ಕೂಲ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ವರ ರೆಡ್ಡಿ, ಕಾರ್ಯದರ್ಶಿ ಮೋಹನ ಚಮಕುರ , ಉಪಾಧ್ಯಕ್ಷೆ ವಿನಿತಾ ಎಸ್ ರೆಡ್ಡಿ, ಮುಖ್ಯ ಗುರು ಝೀನತ ಬೇಗಂ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಇದೇ ವೇಳೆ ಗುರುಮಠಕಲ್ ಪಟ್ಟಣದ ಹಲವು ಪಾಲಕರು ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ, ರಾಧೆಯರ ವೇಷಭೂಷಣದಲ್ಲಿ ಸಿದ್ಧಗೊಳಿಸಿ ಸಂಭ್ರಮಪಟ್ಟಿದ್ದು ಕಂಡು ಬಂತು.

Spread the love

Leave a Reply

Your email address will not be published. Required fields are marked *

error: Content is protected !!