ಮಾರ್ಚ್ 13 ರಂದು ಪಾದಯಾತ್ರೆ : ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅದ್ಧೂರಿ ಅವತಾರೋತ್ಸವ
ಗುರುಮಠಕಲ್: ಇಲ್ಲಿನ ಖಾಸಾಮಠದಿಂದ ಸೂರ್ಯನಂದಿ ಬೆಟ್ಟ ಸುಕ್ಷೇತ್ರ ಯಾನಾಗುಂದಿ ವರೆಗೆ ಪಾದಯಾತ್ರೆಯನ್ನು ಮಾ.13 ರಂದು ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ ಎಂದು ಭಕ್ತರು ತಿಳಿಸಿದ್ದಾರೆ.
ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿ, ಅಮ್ಮನವ ಭಾವಚಿತ್ರದ ಭವ್ಯ ಮೆರವಣಿಗೆ ಮೂಲಕ ಪಾದಯಾತ್ರೆ ಹೊರಡಲಿದ್ದು, ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಎಲ್ಲಾ ಭಕ್ತರು ಭಾಗವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ನಿವೃತ್ತ ಪೊಲೀಸ ಅಧಿಕಾರಿ ತಿಮ್ಮಣ್ಣ ಎನ್, ವೀರಪ್ಪ ಕಿಲ್ಲನಕೇರಾ, ಹುಸೇನಪ್ಪ ಮಲ್ಕಾಪಲ್ಲಿ, ರಾಮುಲು ಮದ್ದೂರು, ವೆಂಕಟಪ್ಪ ಕೋರೆಬನ್, ಕಾಶಪ್ಪ ಮನ್ನೆ, ಅನೀಲ ಮೇಂಗಜಿ, ಹಣಮಂತು ಕಂದೂರ,ರಾಮುಲು, ನರಸಿಂಹಲು ಗಂಗನೋಳ್, ಶರಣಪ್ಪ, ಮಲ್ಲು ಕೇಶ್ವಾರ ಇತರರು ಇದ್ದರು.
