ವೀರಶೈವ ಸಮಾಜದ ನೂತನ ಅಧ್ಯಕ್ಷರಿಂದ ಶಾಸಕ ಶರಣಗೌಡ ಕಂದಕೂರಿಗೆ ಸನ್ಮಾನ | ಯಾದಗಿರಿ ನಿವಾಸದಲ್ಲಿ ಭೇಟಿಯಾದ ಸಮಾಜದ ಮುಖಂಡರಿಂದ ಮನವಿ ಸಲ್ಲಿಕೆ

ಗುರುಮಠಕಲ್: ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಬೂದಿ ಅವರು ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರೊಂದಿಗೆ ಶನಿವಾರ ಶಾಸಕ ಶರಣಗೌಡ ಕಂದಕೂರು ಅವರ ನಿವಾಸಕ್ಕೆ ಭೇಟಿ ನೀಡಿ  ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು “ಕಂದಕೂರು ಕುಟುಂಬವು ಹಲವು ದಶಕಗಳಿಂದ ಗುರುಮಠಕಲ್ ವೀರಶೈವ ಸಮಾಜದ ಪರವಾಗಿ ಪ್ರತ್ಯಕ್ಷ–ಪರೋಕ್ಷವಾಗಿ ಅನನ್ಯ ಬೆಂಬಲ ನೀಡುತ್ತಿದೆ. ವೀರಭದ್ರೇಶ್ವರ ದೇವಸ್ಥಾನದಲ್ಲಿ ನವಮೂರ್ತಿಗಳ ಪ್ರತಿಷ್ಠಾಪನೆಗೆ ನೀಡಿದ ಸಂಪೂರ್ಣ ಕೊಡುಗೆ, ಕೊಡ್ಲಿಮಠದ ತಡೆಗೋಡೆ ನಿರ್ಮಾಣಕ್ಕೆ ಒದಗಿಸಿದ ಅನುದಾನ—ಇವು ಸಮಾಜದ ಅಭಿವೃದ್ಧಿಯತ್ತ ನೀಡಿದ ಅಮೂಲ್ಯ ಸಹಾಯಗಳು,” ಎಂದು ಸ್ಮರಿಸಿದರು. ಸಮಾಜದ ಪ್ರಗತಿ, ಏಳ್ಗೆ ಮತ್ತು ಸಂಘಟನೆಯ ಬಲವರ್ಧನೆಗಾಗಿ ಶಾಸಕರ ನಿರಂತರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಸಮಾಜದ ಪ್ರತಿನಿಧಿಗಳು ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಸಮಾಜದ ಸಮುದಾಯ ಭವನದ ಪ್ರಗತಿಯನ್ನು ಶಾಸಕರಿಗೆ ವಿವರಿಸಿದರು. ಭವನದ ಮುಂದಿನ ಹಂತಗಳಿಗೆ ಅನುದಾನ ಮತ್ತು ಸಹಕಾರ ನೀಡುವಂತೆ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಶರಣಗೌಡ ಕಂದಕೂರು ಅವರು, ವೀರಶೈವ ಸಮಾಜದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡುವುದಕ್ಕೆ ನಾನು ಸದಾ ಬದ್ಧ. ಸಮಾಜದ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. ಸಮುದಾಯ ಭವನ ನಿರ್ಮಾಣದ ಅಗತ್ಯ ಯೋಜನೆಗಳಿಗೆ ಸರ್ಕಾರದಿಂದ ಸಹಾಯವನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ವೀರಶೈವ ಸಮಾಜದ ಪದಾಧಿಕಾರಿಗಳು, ವಿವಿಧ ಘಟಕಗಳ ಮುಖಂಡರು, ಯುವಕರು ಹಾಗೂ ಅಕ್ಕನ ಬಳಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!