ಯಲ್ಹೇರಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ನಗದು ಪ್ರೋತ್ಸಾಹ | ಅಂಬೇಡ್ಕರ್ ನಗರ ಶಾಲೆ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಘೋಷಣೆ

ಗುರುಮಠಕಲ್: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕಿನ ವಿವಿಧ ಇಲಾಖೆ ಕಚೇರಿ, ಶಾಲಾ ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ಯಲ್ಹೇರಿ ಪ್ರೌಢಶಾಲೆ : ತಾಲೂಕಿನ ಯಲ್ಹೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಉತ್ಸವದಲ್ಲಿ ಭಾಗವಹಿಸಿ ಕರವೇ ತಾಲೂಕು ಅಧ್ಯಕ್ಷ ಶರಣು ಕಾಳೂರು ಮಾತನಾಡಿ,  ಸ್ವಾತಂತ್ರ್ಯಕ್ಕಾಗಿ ಸುಭಾಷ್ ಚಂದ್ರ ಬೋಸ್ ,ಭಗತ್ ಸಿಂಗ್ ಚಂದ್ರಶೇಖರ ಆಝಾದ, ಕರ್ನಾಟಕದ ಸ್ವಾತಂತ್ಯ ಹೋರಾಟಗಾರ ಹರ್ಡೇಕರ ಮಂಜಪ್ಪ, ಸುರಪುರದ ರಾಜಾ ವೆಂಕಟಪ್ಪ ನಾಯಕ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವಿದೆ ಎಂದರು.

ಹುಸೇನಪ್ಪ ಸಕ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಭಾರತದ ಪ್ರಜೆಗಳಾದ ನಾವೆಲ್ಲರೂ ಮಹಾತ್ಮ ಗಾಂಧೀಜಿಯ ಕನಸು ಸ್ವಚ್ಛ ಗ್ರಾಮ ನಿರ್ಮಲ ಗ್ರಾಮದ ಕನಸನ್ನು ನನಸು ಮಾಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಪಡೆದು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು. ಮುಖ್ಯ ಅತಿಥಿ ಸೋಮನಾಥ ರೆಡ್ಡಿ ಬೋರೆಡ್ಡಿ ಮಾತನಾಡಿದರು. ಇದೇ ವೇಳೆ 2025-26 ನೇ ಸಾಲಿನಲ್ಲಿ ನಡೆದ SSLC ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಪಡೆದ ವಿದ್ಯಾರ್ಥಿನಿ ಭವಾನಿಗೆ  ಹಣಮಂತ ಶಿಕ್ಷಕರು 11 ಸಾವಿರ ರೂ.  ಬಹುಮಾನ ಮತ್ತು ಹುಸೇನಪ್ಪ ಸಕ್ರಿ ಯವರು ದಿವಂಗತ ಭೀಮಪ್ಪ ಸಕ್ರಿ ಸ್ಮರಣಾರ್ಥ 1001 ರೂಪಾಯಿಗಳ ಬಹುಮಾನ ನೀಡಿ ಗೌರವಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ  ಭೀಮರಾಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಸಪ್ಪ ಕಾವಲಿ, ಸುಭಾಸ ರೆಡ್ಡಿ,  ಮೊಗಲಪ್ಪ ಬೋವಿ ಸ.ಹಿ.ಪ್ರಾ.ಶಾಲೆಯ ಮುಖ್ಯ ಗುರು ಬನ್ನಪ್ಪ , ವಸತಿ ನಿಲಯದ ನಿಲಯಪಾಲಕ ಉಮೇಶ ಭಾಗವಹಿಸಿದರು. ಮೊಗಲಪ್ಪ ಬೋವಿ ಮಕ್ಕಳ ಜೊತೆಗೆ ಭಾಗವಹಿಸಿದ ಮುಖ್ಯ ಗುರುಗಳಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಿದರು. ಶಿವಾನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಟಿ. ರಾಮುಲು ಸ್ವಾಗತಿಸಿದರೆ ಶ್ರೀದೇವಿ ನಿರೂಪಿಸಿದರು. ಬಸವರಾಜ ವಂದಿಸಿದರು.

ಅಂಬೇಡ್ಕರ್ ನಗರ: ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿತು. ಇದಕ್ಕೂ ಮೊದಲು ಪ್ರಮುಖ ಬೀದಿಗಳಲ್ಲಿ ದೇಶ ಭಕ್ತಿಯ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಯಿತು. ಮುಖ್ಯ ಗುರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು. ಎಸ್ ಡಿ ಎಂ ಸಿ ಅಧ್ಯಕ್ಷ ಭೀಮಪ್ಪ ಮೀನಿಂಟಿ, ಉಪಾಧ್ಯಕ್ಷೆ ಸುನೀತ ಗೋಡ್ಸೆ,   ಎಸ್ ಡಿ ಎಮ್ ಸಿ ಸದಸ್ಯ ಭೀಮಶೆಪ್ಪ ಶನಿವಾರಂ, ಕಿಷ್ಟಪ್ಪ ಎಸ್, ಹನುಮಂತ ದಾಸರಿ, ಹನುಮಂತ ಪಾಲಮುರಿ, ಸುಷ್ಮಾ ಕಿಂದಿಟಿ, ಲಾಲಿತಾ ಪಾಲಮುರಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!