ಗುರುಮಠಕಲ್ : ಅಲೆಮಾರಿ ಬುಡಗ ಜಂಗಮ ಸಮುದಾಯ ಇಬ್ಬರು ಯುವತಿಯರ ಸಾವಿನ ಕುರಿತು ಪ್ರಾಮಾಣಿಕ ಕಾನೂನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಲು ವಿಶ್ವ ಹಿಂದೂ ಪರಿಷದ, ಬಜರಂಗದಳ ಹಾಗೂ ಹಿಂದೂ ಯುವ ಘರ್ಜನೆ ವತಿಯಿಂದ ಗುರುಮಠಕಲ್ ತಾಲೂಕು ದಂಡಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತ ಇಂದಿರಾನಗರ ಗುರುಮಠಕಲ್ ಮನೆಯಿಂದ ಚಿಂದಿ ಆಯಲು ಹೋಗಿ, ಫೆ. 12 ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇಬ್ಬರ ಶವ ಸಿಕ್ಕಿರುತ್ತದೆ. ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ಈ ವೇಳೆ ಸೂರ್ಯನಾರಾಯಣ ನೀರೆಟಿ, ಶ್ರೀನಿವಾಸ ಯಾದವ, ಜಗದೀಶ ಕುಮಾರ್ ಭೂಮ, ಬಸವರಾಜ ಪಡಿಗೆ, ಸಂಜು ಕುಮಾರ ಅಳೇಗಾರ, ವೆಂಕಟೇಶ್ ಮುದಿರಾಜ, ಶರಣು, ಬನ್ನಪ್ಪ, ಬಸವರಾಜ್ ಇನ್ನಿತರರು ಇದ್ದರು.
