ಅಂಕಮ್ಮ ಮಾತೆಗೆ ವಿಶೇಷ ಅಲಂಕಾರ | ಮಹಾ ಮಂಗಳಾರತಿ, ಮಹಾಪ್ರಸಾದ
ಗುರುಮಠಕಲ್: ಆಷಾಡ ಮಾಸದ ಹಿನ್ನೆಲೆ ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ವಿಶೇಷ ಪೂಜೆ ನೆರವೇರಿತು.
ಪಟ್ಟಣದ ಸಮಾಜದವರು ಬೆಳಿಗ್ಗೆ ಅಭಿಷೇಕ ನೆರವೇರಿಸಿ, ಬಳಿಕ ಮಹಾ ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಿತು.
ವಿಠ್ಠಲ ಮಿಸ್ಕಿನ್ ಪೂಜಾರಿ ಅವರ ದೇವಿ ಮೂರ್ತಿಯ ವಿಶೇಷ ಅಲಂಕಾರ ಮೆಚ್ಚುಗೆಗೆ ಪಾತ್ರವಾಯಿತು.
ಸಮಾಜದ ಅಧ್ಯಕ್ಷ ಚಂದುಲಾಲ ಚೌಧರಿ, ರಾಮಕಿಶನರಾವ ಗೊಂಗಲೆ, ನವ ಯುವಕ ಸಂಘದ ಅಧ್ಯಕ್ಷ ವಿನಾಯಕ ಜನಾರ್ಧನ, ಮಹಿಳಾ ಮಂಡಳ ಅಧ್ಯಕ್ಷೆ ಶೋಭಾರಾಣಿ ರಂಗಾಪುರ, ಡಾ. ನರಸಿಂಗರಾವ್ ಕಾಶಿಗಾವ್, ಹಣಮಂತರಾವ ಗೊಂಗಲೆ, ತುಳಸಿರಾಮ ಗೊಂಗಲೆ, ಲಕ್ಷ್ಮಣರಾವ್ ಕಮಲಾಪುರ, ಛಟ್ಟುಲಾಲ ಅರಸಿದ, ಯಶವಂತರಾವ ಚೌಧರಿ, ಲಕ್ಷ್ಮಣರಾವ್ ಚೌಧರಿ, ಸತೀಶ ಜೀತ್ರಿ, ವೆಂಕಟರಾವ್ ಮೇಂಗಜಿ, ಪಾಂಡುರಂಗರಾವ ಡಿ.
ಜಗದೀಶ್ಚಂದ್ರ ಮೇಂಗಜಿ, ವಸಂತರಾವ ಹಬೀಬ, ಕಿಶನರಾವ ಮೇಂಗಜಿ, ಮಾಣಿಕಪ್ರಭು ಚೌಧರಿ, ತುಕಾರಾಮ ಧಡಂಗೆ, ಮೋಹನ್ ಚಮಕೂರ, ಹೀರಾಲಾಲ ಬಸೂದೆ, ಮೋಹನ ಬುರಬುರೆ, ಪವನ್ ಮೇಂಗಜಿ, ನಿತೀನ್ ತಗಡಘರ, ಅನೀಲ ಜೀತ್ರಿ, ಭರತ ಜೀತ್ರಿ, ಬಾಲಾಜಿ ತಗಡಘರ ಸೇರಿದಂತೆ ಸಂತೋಷ ಅರಸಿದ, ಸತೀಶ ಜನಾರ್ಧನ, ವೆಂಕಟರಾವ್ ಫುಲಜಾಡ, ಸಮಾಜದ ಯುವಕರು, ಮಹಿಳೆಯರು ಹಾಗೂ ಗಣ್ಯರು ಭಾಗವಹಿಸಿದ್ದರು.
