ನಗರದ ಮುಸ್ಲಿಂ ಪಂಚ್ ಅಧ್ಯಕ್ಷರಾಗಿ ಮೈನುದ್ದೀನ್ ಅವಿರೋಧ ಆಯ್ಕೆಯಾದ ಹಿನ್ನಲೆ ಬೆಂಬಲಿಗರು ಸಂತಸ ಹಂಚಿಕೊಂಡರು
ಗುರುಮಠಕಲ್: ಮುಸ್ಲಿಂ ಪಂಚ್ ಅಧ್ಯಕ್ಷರಾಗಿ ಸೈಯಾದ್ ಖಾಜಾ ಮೈನುದ್ದೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ಭಾನುವಾರ ನಡೆದ ಗುರುಮಠಕಲ್ ನಗರ ಮುಸ್ಲಿಂ ಪಂಚ್ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಚುನಾವಣೆಯು ಗುರುಮಠಕಲ್ನ ಖತೀಬ್ ಡಾ.ಮುಜಾಫರ್ ಖಾನ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು.ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೈಯಾದ್ ಖಾಜಾ ಮೈನುದ್ದೀನ್ (ಅಧ್ಯಕ್ಷ) ಪಯಾಜ್ ಅಹಮದ್ ( ಉಪಾಧ್ಯಕ್ಷ), ಅಬ್ದುಲ್ ನಬಿ ಹವಾಲ್ದಾರ್ (ಕಾರ್ಯದರ್ಶಿ) ಚಂದಪಾಶ ಖಾಜಂಚಿಯಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಮುಬಾರಕ ಬೀನ್ಸ್ ಜಮೀಲ್,ಪಾಶ ಪ್ಯಾರೇ, ಅಕರ್ ಪ್ಯಾರೆ.ಮುಜುದಿನ್ ಖಾನ್.ಅಕ್ಟರ್, ಸೈಯಾದ್ ಬಾಬಾ.ಬಾಬಾ ಚಿಂತಕುಂಟಿ,ವಹಿದ್ ಚಿಂತಕುಂಟೆ, ನಹಿಮ್,ಸೀರಾಜ್.ಪೀರ್ ಅಹಮದ್ ಜಾಕ.ಹಬೀದ್ ಬಾಬು,ಸಜೀದ್, ಸೇರಿದಂತೆ ಇತರರು ಹಾಗೂ ಯುವಕರು ಇದ್ದರು.
